ಅಂದುಕೊಂಡ ರೀತಿಯಲ್ಲೇ ಚಿತ್ರೀಕರಣ ಮುಗಿಸಿರುವ ‘ಮದರಂಗಿ’ ಚಿತ್ರವೂ ಇದೀಗ ಮಾತಿನ ಮನೆಯಲ್ಲಿ ಬಂದು ನಿಂತಿದೆ. ಕ್ರೇಜಿ ಮೈಂಡ್ಸ್ ಶ್ರೀ ಅವರ ಸಂಕಲನ ಸ್ಟುಡಿಯೋದಲ್ಲಿ ‘ಮದರಂಗಿ’ ಚಿತ್ರಕ್ಕೆ ೧೫ ದಿವಸಗಳಿಂದ ನದಸಲಾಗುತಿದೆ. ೪೫ ದಿವಸಗಳ ಮಾತಿನ ಬಾಗ ಹಾಗೂ ಐದು ಹಾಡುಗಳ ಸಂಕಲನ ಬುದ್ದಿವಂತ ಸಂಕಲನಕರ ಶ್ರೀ ಅವರು ನೆರವೇರಿಸುತ್ತಿದ್ದಾರೆ.
ಈ ಚಿತ್ರದ ಇಡುವರೆಗಿನ ವಿಶೇಷ ಏನಪ್ಪಾ ಅಂದರ ಟೈಗರ್ ಕಾಪ್ ಎಂದೇ ಪ್ರಸಿದ್ದಿಯಾದ ನಿವೃತ್ತ ಎ. ಸಿ. ಪಿ. ಬಿ.ಬಿ. ಅಶೋಕ್ ಕುಮಾರ್ ಅವರು ಈ ‘ಮದರಂಗಿ’ ಚಿತ್ರದಲ್ಲಿ ಪೋಲೀಸು ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ..
ನಿವೃತ್ತ ಪೋಲೀಸು ಅಧಿಕಾರಿ ನಿರ್ಮಾಪಕ ನಾಗಪ್ಪ ಅವರ ಪುತ್ರ ಕೃಷ್ಣ ನಾಯಕನಾಗಿರುವ ‘ಮದರಂಗಿ’ ಚಿತ್ರವೂ ಮಲ್ಲಿಕಾರ್ಜುನ ಅವರ ನಿರ್ದೇಶನದಲ್ಲಿ ಸದ್ದು ಗದ್ದಲವಿಲ್ಲದೆ ಚಿತ್ರೀಕರಣವನ್ನು ಬೆಂಗಳೂರು, ಇನ್ನೋವಟ್ಟೀವ್ ಫಿಲ್ಮ್ ಸಿಟೀ, ತವರಕೆರೆ ಸ್ಥಳಗಳಲ್ಲಿ ಪೂರ್ತಿಗೊಳಿಸಿಕೊಂಡಿದೆ.
ನಿರ್ದೇಶಕ ಮಲ್ಲಿಕಾರ್ಜುನ ಅವರ ಪ್ರಕಾರ ’ಮದರಂಗಿ’ ಚಿತ್ರವೂ ತ್ರಿಲ್ ಇರುವ ಪ್ರೇಮ ಕಥೆಯನ್ನು ಒಳಗೊಂಡಿದೆ. ಜನವರಿ ಎರಡನೇ ವಾರದಲ್ಲಿ ಧ್ವನಿ ಸುರುಳಿ ಬೀದಿಗಡೆ ಮಾಡಿಕೊಂಡು ಫೆಬ್ರವರಿ ಮಾಸದಲ್ಲಿ ಚಿತ್ರವನ್ನೂ ತೆರೆಗೆ ತರುವ ಲೆಕ್ಕಾಚಾರವನ್ನು ನಿರ್ದೇಶಕರು ಇಟ್ಟುಕೊಂಡಿದ್ದಾರೆ. ಐದು ಹಾಡು ಹಾಗೂ ಐದು ಸಾಹಸ ಸನ್ನಿವೇಶಗಳಿಗೆ ಮಲ್ಲಿಕಾರ್ಜುನ್ ಚಿತ್ರದಲ್ಲಿ ಕಲ್ಪಿಸಿದ್ದಾರೆ
ಪುಟ್ಟ ಪರದೆಯಲ್ಲಿ ಅಂದರೆ ‘ಕೃಷ್ಣ ರುಕ್ಮಿಣಿ’ ಧಾರವಾಹಿಯಲ್ಲಿ ೩೦೦ ಕಂತುಗಳಲ್ಲಿ ಮನೆಮಾತಾಗಿ ‘ಕೃಷ್ಣ’ ಎಂದೇ ಮನೆ ಮನೆಗೆ ಪರಿಚಯ ಆಗಿರುವ ಎಂ.ಬಿ. ಎ ವ್ಯಾಸಂಗ ಮಾಡಿರುವ ಸುನಿಲ್ ಇಂದು ಕೃಷ್ಣ ಎಂದೇ ಹಿರಿ ತೆರೆಗೆ ಪರಿಚಯ ಆಗುತ್ತಿದ್ದಾರೆ. ಕೃಷ್ಣ ಟಾಕಿಸ್ ಬ್ಯಾನರ್ ಅಡಿಯಲ್ಲಿ ಈ ‘ಮದರಂಗಿ’ ತಯಾರಾಗುತ್ತಿದೆ.
ನಾಯಕನಾಗಿ ಕೃಷ್ಣ, ಚಿತ್ರರಂಗವನ್ನು ಹತ್ತಿರದಿಂದ ತಿಳಿದುಕೊಂಡೆ ಕಥಾನಾಯಕನಾಗಿ ಅಭಿನಯಿಸುತಿದ್ದಾರೆ. ಸಹಾಯಕ ನಿರ್ದೇಶಕನ ಅನುಭವ, ಚಿತ್ರಕತೆಯ ಅರಿವು ಹಾಗೂ ಕೆಲವು ಸಿನೆಮಾಗಳಲ್ಲಿ ಪಾತ್ರ ಮಾಡಿದ ಅನುಭವ ಕೃಷ್ಣ ಅವರಿಗಿದೆ.
ಕಥಾ ನಾಯಕಿ ಸುಷ್ಮಾ ರಾಜ್ ಈ ಸಿನೆಮಾದಲ್ಲಿ ಆಗರ್ಭ ಶ್ರೀಮಂತ ಉದ್ಯೋಗಿಯ ಮಗಳಾಗಿ ಅಭಿನಯಿಸುತ್ತಿದ್ದಾರೆ.
ಅನೂಪ್ ಸೀಳಿನ್ ಅವರ ಸಂಗೀತದಲ್ಲಿ ಡಾರ್ಲಿಂಗ್ ಡಾರ್ಲಿಂಗ್ ಎಂಬ ಹಾಡು ಚಿತ್ರ ತಂಡದಲ್ಲಿ ಜನಪ್ರಿಯ ಆಗಿದೆ. ಡಾಕ್ಟರ್.ವಿ ನಾಗೇಂದ್ರ ಪ್ರಸಾದ್, ಅರಸು ಅಂತಾರೆ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ಕೆ. ಗಿರೀಷ್ ಅವರು ೪೩೫ ಕೆಮೆರಾ ಹಿಡಿದು ಈ ಚಿತ್ರದ ಮುಖಾಂತರ ಸ್ವತಂತ್ರ ಛಾಯಾಗ್ರಾಹಕರಾಗಿ ಕಾಲಿಡುತ್ತಿದ್ದಾರೆ.
ಕಾವ್ಯ ಶೆಟ್ಟಿ, ಸಾಧು ಕೋಕಿಲ, ಅವಿನಾಷ್, ಶ್ರೀ ನಿವಾಸ್ ಪ್ರಭು, ವಿನಯಪ್ರಕಾಶ್, ಲೋಹಿತಾಶ್ವ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ಸಹ ತಾರಾಗಣದಲ್ಲಿ ಇದ್ದಾರೆ.
ಶ್ರೀ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ ಮುರಳಿ ಅವರ ನೃತ್ಯ ನಿರ್ದೇಶನ, ಬಾಬು ಖಾನ್ ಅವರ ಕಲಾ ನಿರ್ದೇಶನ ಚಿತ್ರಕ್ಕೆ ಒದಗಿಸಿದ್ದಾರೆ.